ನವದೆಹಲಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ಗೆ ಜಾಮೀನು ಮಂಜೂರು ಮಾಡಿದ ಕರ್ನಾಟಕ ಹೈ ಕೋರ್ಟ್ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ. ನಟ ದರ್ಶನ್ ಗೆ ಜಾಮೀನು ಮಂಜೂರು ಮಾಡಿ ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ಗ್ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಹಾಗೂ ಆರ್. ಮಹಾದೇವನ್ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿದ್ದು, ವಾದ-ಪ್ರತಿವಾದ ಆಲಿಸಿ ಬಳಿಕ ಅತೃಪ್ತಿಯಲ್ಲೇ ಕೋರ್ಟ್ ಬೇಲ್ ಅರ್ಜಿ ವಿಚಾರಣೆ ಮುಂದೂಡಿದೆ.

ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ದರ್ಶನ್ 2ನೇ ಆರೋಪಿ. ಸದ್ಯ ದರ್ಶನ್ಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಿದ್ದು, ದಾಸ ಜೈಲು ವಾಸದಿಂದ ಮುಕ್ತಿ ಪಡೆದಿದ್ದಾರೆ. ರೆಗ್ಯೂಲರ್ ಜಾಮೀನು ಪಡೆದು ಸದ್ಯ ಥಾಯ್ಲೆಂಡ್ನಲ್ಲಿ ಡೆವಿಲ್ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ದಾಸನ ಜಾಮೀನು ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಿನ್ನೆ ನಡೆದಿದ್ದು, ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠ ಸರ್ಕಾರರದ ಪರ ವಕೀಲ ಸಿದ್ದಾರ್ಥ್ ಲೂಥ್ರಾ ಮತ್ತು ದರ್ಶನ್ ಪರ ವಕೀಲ ಕಪಿಲ್ ಸಿಬಲ್ರ ವಾದವನ್ನ ಆಲಿಸಿದೆ.
ನ್ಯಾ. ಪರ್ದಿವಾಲಾ : ಹೈಕೋರ್ಟ್ ತನ್ನ ವಿವೇಚನೆ ಸರಿಯಾಗಿ ಬಳಸಿಲ್ಲವೆಂದು ಭಾವಿಸುತ್ತೇವೆ. ಹೈಕೋರ್ಟ್ ಹೇಗೆ ಆದೇಶ ನೀಡಿದೆ ಅನ್ನೋದನ್ನ ನೀವೂ ಗಮನಿಸಿರ್ತೀರಿ.
ಕಪಿಲ್ ಸಿಬಲ್ : ಹೈಕೋರ್ಟ್ ಮಾಡಿದ್ದನ್ನ ಮರೆತುಬಿಡಿ. 161 ಮತ್ತು 164 ಹೇಳಿಕೆಗಳನ್ನ, ಸಾಕ್ಷಿಗಳನ್ನ ಗಮನಿಸಿ
ನ್ಯಾ. ಪರ್ದಿವಾಲಾ : ನಾನು ನಿಮಗೆ ಕೆಲ ವಿಚಾರಗಳನ್ನ ತೋರಿಸುತ್ತೇನೆ. ಅದನ್ನ ಗುರುತು ಹಾಕೋದು ಮರೆತಿದೆ. ನಿಮ್ಮ ವಾದವನ್ನ ನಾವು ಮಂಗಳವಾರ ಆಲಿಸುತ್ತೇವೆ. ನಿಮ್ಮ ಸಬ್ಮಿಷನ್ಗಳನ್ನ ನೀವು ಸಿದ್ಧವಾಗಿಟ್ಟುಕೊಳ್ಳಿ. ನಾವ್ಯಾಕೆ ಮಧ್ಯಪ್ರವೇಶ ಮಾಡಬಾರದು ಅನ್ನೋ ನಿಮ್ಮ ವಾದವನ್ನ ಆಲಿಸುತ್ತೇವೆ. ಜುಲೈ 22ರಂದು ವಿಚಾರಣೆಯನ್ನ ನಡೆಸುತ್ತೇವೆ.
ಕಪಿಲ್ ಸಿಬಲ್ : ಮಾರ್ಕ್ ಮಾಡಿರುವ ಭಾಗ ಯಾವುದು ಅಂತ ಮಾನ್ಯ ಕೋರ್ಟ್ ತಿಳಿಸಬಹುದೇ?
ನ್ಯಾ. ಪರ್ದಿವಾಲಾ : ದರ್ಶನ್ಗೆ ಹೇಗಾದರೂ ಜಾಮೀನು ಕೊಡಬೇಕು. ಒಂದು ಅಂಶ ಸಿಕ್ಕಿದರೂ ಸಾಕು ಜಾಮೀನು ಕೊಟ್ಟು ಬಿಡೋಣ ಎನ್ನುವ ಚಡಪಡಿಕೆ ಹೈಕೋರ್ಟ್ಗೆ ಕಾಣಿಸುತ್ತಿದೆ. ಈ ಚಡಪಡಿಕೆ ಇರುವ ಭಾಗ.
ಸಿದ್ದಾರ್ಥ್ ಲೂಥ್ರಾ : ಅವರು ನಮ್ಮ ಪ್ರಮುಖ ಸಾಕ್ಷಿಯ ಜೊತೆ ವೇದಿಕೆಯನ್ನ ಹಂಚಿಕೊಂಡಿದ್ದರು. ಇದು ಸ್ವಲ್ಪ ಗೊಂದಲಮಯವಾಗಿದೆ
ಕಪಿಲ್ ಸಿಬಲ್ : ಅವರು ಪ್ರಮುಖ ಸಾಕ್ಷಿಯಲ್ಲ
ಸಿದ್ದಾರ್ಥ್ ಲೂಥ್ರಾ : ಪ್ರಮುಖ ಸಾಕ್ಷಿ ಅನ್ನೋದರ ವ್ಯಾಖ್ಯಾನ ಏನು ಅನ್ನೋದು ನನಗೆ ಗೊತ್ತಿಲ್ಲ
ಹೀಗೆ ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ಪೀಠ, ರಾಜ್ಯ ಹೈಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಅತೃಪ್ತಿಯನ್ನ ಹೊರಹಾಕಿದೆ. ತೀರ್ಪಿನಲ್ಲಿ ಹೈಕೋರ್ಟ್ ವಿವೇಚನೆ ಬಳಸಿದಂತೆ ಕಾಣುತ್ತಿಲ್ಲ ಅಂತ ಸುಪ್ರೀಂಕೋರ್ಟ್ ಅಸಮಾಧಾನ ಹೊರಹಾಕಿದ್ದು, ಅಲ್ಲದೇ ಜುಲೈ 22ಕ್ಕೆ ಜಾಮೀನು ಅರ್ಜಿ ವಿಚಾರಣೆಯನ್ನ ಮುಂದೂಡಿಕೆ ಮಾಡಿದೆ.

ಸುಪ್ರೀಂಕೋರ್ಟ್ನಲ್ಲಿ ದರ್ಶನ್ ಜಾಮೀನು ರದ್ದು ಕೋರಿ ಮಾಡಿರೋ ರಾಜ್ಯ ಸರ್ಕಾರದ ಪರ ವಕೀಲರ ವಾದ ಮುಗಿದಿದೆ. ಇನ್ನು ಜುಲೈ 22ಕ್ಕೆ ದಾಸನ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಲಿದ್ದಾರೆ. ಹೈಕೋರ್ಟ್ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ಅಸಮಧಾನ ವ್ಯಕ್ತಪಡಿಸಿರೋ ಬಗ್ಗೆ ಸರ್ಕಾರಿ ವಕೀಲ ಅನಿಲ್ ನಿಶಾನಿ ಮಾಹಿತಿ ನೀಡಿದ್ದಾರೆ.
ಸದ್ಯ ಆರೋಪಿ ದರ್ಶನ್ ಡೆವಿಲ್ ಸಿನಿಮಾದ ಶೂಟಿಂಗ್ಗಾಗಿ ಥಾಯ್ಲೆಂಡ್ನಲ್ಲಿದ್ದಾರೆ. ಒಂದು ವೇಳೆ ಜುಲೈ 22ರಂದು ದರ್ಶನ್ ವಿರುದ್ಧ ಆದೇಶ ಬಂದ್ರೆ, ಮತ್ತೆ ನಟನಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ. ದರ್ಶನ್ ಗ್ಯಾಂಗ್ ಮತ್ತೆ ಜೈಲು ಸೇರಬೇಕಾಗುತ್ತದೆ. ಆದ್ರೆ, ಡೆವಿಲ್ ಭವಿಷ್ಯ ಕಪಿಲ್ ಸಿಬಲ್ ವಾದ ಮಂಡನೆ ಮೇಲೆ ನಿಂತಿದೆ.
ಇದನ್ನೂ ಓದಿ : ಮದ್ವೆಯಾಗ್ತೀನಿ ಅಂತ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ ಆರೋಪ – ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ವಿರುದ್ಧ ದೂರು!







