ದಿಲ್ಲಿ ಸೋತ ಕೇಜ್ರಿವಾಲ್​ಗೆ ಮತ್ತೊಂದು ಶಾಕ್.. ಶೀಷಮಹಲ್ ನವೀಕರಣ ಹಗರಣದ ತನಿಖೆಗೆ ಸಿವಿಸಿ ಆದೇಶ!

ದೆಹಲಿ : ದಿಲ್ಲಿ ಎಲೆಕ್ಷನ್​​ನಲ್ಲಿ ಸೋತ ಕೇಜ್ರಿವಾಲ್​ಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಅರವಿಂದ್ ಕೇಜ್ರಿವಾಲ್ ಅವರ ಬಂಗಲೆ ಶೀಷಮಹಲ್ ನವೀಕರಣ ಮತ್ತು ಐಷಾರಾಮಿ ಸೌಲಭ್ಯಗಳ ವೆಚ್ಚದ ಬಗ್ಗೆ ಕೇಂದ್ರ ಜಾಗೃತ ಆಯೋಗ(ಸಿವಿಸಿ) ವಿವರವಾದ ತನಿಖೆಗೆ ಆದೇಶಿಸಿದೆ.

ದಿಲ್ಲಿ ಸಿಎಂ ಅಧೀಕೃತ ನಿವಾಸ ಶೀಷಮಹಲ್ ನವೀಕರಣಕ್ಕೆ 2 ಬಂಗಲೆ ಒಡೆದ ಆರೋಪ ಕೇಳಿಬಂದಿದೆ. 8 ಕೋಟಿ ಮೂಲ ಅಂದಾಜಿನ ಬದಲು 33 ಕೋಟಿ ವೆಚ್ಚವಾಗಿದೆ. ದುಬಾರಿ ಪೀಠೋಪಕರಣಗಳು, ಟಿವಿ, ರೇಲಿಂಗ್, 77 ಲಕ್ಷದ ಟಿವಿ ಅಳವಡಿಕೆ, 50 ಲಕ್ಷದ ರೇಷ್ಮೆ ರತ್ನಗಂಬಳಿ.

42 ಲಕ್ಷದ ಹಿತ್ತಾಳೆ ರೇಲಿಂಗ್, 96 ಲಕ್ಷದ ಕಿಟಕಿ ಪರದೆ. 6 ಲಕ್ಷದ ಸೋಫಾ ಸೆಟ್, 18 ಲಕ್ಷದ ಜಿಮ್, 20 ಲಕ್ಷದ ಸ್ಪಾ, ಬಾತ್​ರೂಂಗೆ 18 ಲಕ್ಷದ ಹಾಟ್ ವಾಟರ್ ಮೆಷಿನ್ ಹಾಗೂ ಕೇಜ್ರಿವಾಲ್ 12 ಲಕ್ಷ ರೂಪಾಯಿ ಕಮೋಡ್ ಅಳವಡಿಸಿದ್ದರು. ಹಾಗಾಗಿ ಜನರ ತೆರಿಗೆ ದುಡ್ಡು ಅಕ್ರಮವಾಗಿ ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಬಿಜೆಪಿ ನಾಯಕ ವಿಜೇಂದ್ರ ಗುಪ್ತ ನೀಡಿದ್ದ ದೂರಿನ ಮೇರೆಗೆ ತನಿಖೆ ನಡೆಯುತ್ತಿದೆ.

ಅಕ್ಟೋಬರ್ 14, 2024 ರಂದು, 6 ಫ್ಲ್ಯಾಗ್ ಸ್ಟಾಫ್ ರಸ್ತೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹಿಂದಿನ ನಿವಾಸದಲ್ಲಿ ಅಕ್ರಮ ನಿರ್ಮಾಣದ ಬಗ್ಗೆ ಗುಪ್ತಾ ಕೇಂದ್ರ ಜಾಗೃತ ಆಯೋಗ(ಸಿವಿಸಿ)ಕ್ಕೆ ದೂರು ನೀಡಿದ್ದರು.

40,000 ಚದರ ಗಜಗಳಷ್ಟು (8 ಎಕರೆ) ವಿಸ್ತೀರ್ಣದ ಐಷಾರಾಮಿ ಮಹಲು (‘ಶೀಶ್ ಮಹಲ್’) ನಿರ್ಮಿಸಲು ಕೇಜ್ರಿವಾಲ್ ಕಟ್ಟಡ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಗುಪ್ತಾ ಆರೋಪಿಸಿದ್ದಾರೆ.

ಇದನ್ನೂ ಓದಿ : http://ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ್-ಧನ್ಯತಾ.. ಇಲ್ಲಿದೆ ನವಜೋಡಿಯ ಕ್ಯೂಟ್ ಫೋಟೋಸ್!

Btv Kannada
Author: Btv Kannada

Read More