ರಾಜ್ಯದಲ್ಲಿ ಮುಂದುವರಿದ ಹೃದಯಾಘಾತ ಕೇಸ್ – ಚಿಕ್ಕಮಗಳೂರಿನಲ್ಲಿ ಒಂದೇ ದಿನ ಹಾರ್ಟ್​ ಅಟ್ಯಾಕ್​ಗೆ ಇಬ್ಬರು ಬಲಿ!

ಚಿಕ್ಕಮಗಳೂರು : ರಾಜ್ಯದಲ್ಲಿ ಸಂಭವಿಸ್ತಿರುವ ಹೃದಯಾಘಾತ ದುರಂತ ಪ್ರಕರಣಗಳು ಮುಂದುವರಿದಿವೆ. ಹಾಸನ ಬಳಿಕ ರಾಜ್ಯಾದ್ಯಂತ ಹೃದಯಾಘಾತ ಕೇಸ್​ಗಳು ಹಬ್ಬಿದ್ದು, ಚಿಕ್ಕಮಗಳೂರಿನಲ್ಲಿ ಒಂದೇ ದಿನ ಹಾರ್ಟ್​ ಅಟ್ಯಾಕ್​ಗೆ ಇಬ್ಬರು ಬಲಿಯಾಗಿದ್ದಾರೆ.

27 ವರ್ಷದ ಮೀನಾಕ್ಷಿ, 75 ವರ್ಷದ ಸುಮಿತ್ರೇಗೌಡ ಹಾರ್ಟ್​ ಅಟ್ಯಾಕ್​ನಿಂದ ಸಾವನ್ನಪ್ಪಿದವರು. ಮೂಡಿಗೆರೆ ತಾಲೂಕಿನ ಭಾರೀಬೈಲು ಗ್ರಾಮದ ಯುವತಿ ಮೀನಾಕ್ಷಿ
ಎದೆ ಉರಿ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಯುವತಿ ಮೀನಾಕ್ಷಿ ಹಾರ್ಟ್​ ಅಟ್ಯಾಕ್​ನಿಂದ ಮೃತಪಟ್ಟಿದ್ದಾರೆ.

ಬಿ.ಹೊಸಳ್ಳಿ ಗ್ರಾಮದ ಸುಮಿತ್ರೇಗೌಡ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ದಿನೇ ದಿನೇ ಹಾರ್ಟ್​ ಅಟ್ಯಾಕ್​ ಸರಣಿ ಸಾವುಗಳು ಹೆಚ್ಚಾಗ್ತಿದ್ದು, ಯುವಜನತೆ, ವೃದ್ಧರು ಸೇರಿ ಯಾರನ್ನೂ ಬಿಡದೇ ಹೃದಯಾಘಾತ​ ಸಂಭವಿಸುತ್ತಿವೆ.

ಇದನ್ನೂ ಓದಿ : “ಜಸ್ಟ್ ಮ್ಯಾರೀಡ್” ಚಿತ್ರದ ಪ್ರಮುಖ ಪಾತ್ರದಲ್ಲಿ ವಾಣಿ ಹರಿಕೃಷ್ಣ ಮತ್ತು ರವಿಶಂಕರ್ ಗೌಡ!

Btv Kannada
Author: Btv Kannada

Read More