ಬೆಂಗಳೂರಲ್ಲಿ ಭೀಕರ ಅಪಘಾತ – ಡಿಕ್ಕಿಯ ರಭಸಕ್ಕೆ ಟೆಂಪೋ ಎರಡು ಪೀಸ್, ಮೂವರಿಗೆ ಗಂಭೀರ ಗಾಯ!

ಬೆಂಗಳೂರು : ಜ್ಞಾನಭಾರತಿ ರಿಂಗ್ ರಸ್ತೆಯ ರಾಮಸಂದ್ರ ಬ್ರಿಡ್ಜ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯವಾಗಿದೆ. ರಭಸವಾಗಿ ಬಂದ ಟೆಂಪೋ ರಸ್ತೆ ಬದಿಗೆ ಡಿಕ್ಕಿ ಹೊಡೆದಿದ್ದು, ಟೆಂಪೋ ಎರಡು ಪೀಸ್​ ಆಗಿದೆ.

ಈ ಘಟನೆ ಜುಲೈ 5 ರಂದು ಮಧ್ಯಾಹ್ನ 1 ಗಂಟೆಗೆ ಜ್ಞಾನಭಾರತಿ ರಿಂಗ್ ರಸ್ತೆಯ ರಾಮಸಂದ್ರ ಬ್ರಿಡ್ಜ್ ಬಳಿಯಲ್ಲಿ ನಡೆದಿದೆ. ಟೆಂಪೊ ಬ್ಯಾಡರಹಳ್ಳಿ ಕಡೆಯಿಂದ ಕೆಂಗೇರಿ ಕಡೆಗೆ ತೆರಳುತ್ತಿತ್ತು. ರಿಂಗ್ ರಸ್ತೆಯಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಟೆಂಪೋದಲ್ಲಿ ಬೆಡ್ ಶೀಟ್ ಮತ್ತು ಬಟ್ಟೆಗಳು ತುಂಬಿದ್ದವು. ಸ್ಪೀಡ್​ ಆಗಿ ಬಂದ ಟೆಂಪೊ ಬಲಭಾಗದ ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದು, ಡಿವೈಡರ್​ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಟೆಂಪೋ ಕ್ಯಾಬಿನ್ ತುಂಡಾಗಿ ಕೆಳಗೆ ಬಿದ್ದಿದೆ.

ಡ್ರೈವರ್ ಸೀಟ್ ನಿಂದ ನೇತಾಡಿ ಕೆಳಗೆ ಬಿದ್ದ ಚಾಲಕ 35 ವರ್ಷದ ರಾಘವೇಂದ್ರಗೆ ತೀವ್ರ ಗಾಯವಾಗಿದೆ. ಟೆಂಪೊದಲ್ಲಿದ್ದ ಸಲೀಂ ಮತ್ತು ಫಜಾಯ್​ಗೂ ಗಾಯವಾಗಿದೆ. ಬ್ರಿಡ್ಜ್ ನಿಂದ ಕೆಳಗೆ ಬಿದ್ದ ಕ್ಯಾಬಿನ್ ನಲ್ಲಿದ್ದ ಮೂವರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಅಪಘಾತ ಸಂಬಂಧ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ : ನೈಸ್ ಯೋಜನೆಗಾಗಿ KIADB ವಶಪಡಿಸಿಕೊಂಡ 300 ಎಕರೆ ಭೂಸ್ವಾಧೀನ ರದ್ದು!

Btv Kannada
Author: Btv Kannada

Read More