ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಹೃದಯಾಘಾತಕ್ಕೆ ರೈತ ಬಲಿ!

ಬೆಂಗಳೂರು : ಹೃದಯಾಘಾತ ಎನ್ನುವ ಪದ ಇತ್ತೀಚೆಗೆ ಪ್ರತಿಯೊಬ್ಬರ ಎದೆ ಬಡಿತವನ್ನು ಹೆಚ್ಚುವಂತೆ ಮಾಡುತ್ತಿದೆ. ವಯಸ್ಸಿನ ಮಿತಿಯೇ ಇಲ್ಲದೆ ಬಾಲಕರಿಂದ ವೃದ್ಧರವರೆಗೂ ಹೃದಯದ ಕಾಯಿಲೆ ಕಾಡುತ್ತಿದೆ. ಈ ಬಗ್ಗೆ ಸಾಕಷ್ಟು ಅಧ್ಯಯನಗಳು ಕೂಡ ನಡೆಯುತ್ತಿವೆ.

ಇದರ ನಡುವೆ ಇದೀಗ ಹೃದಯಾಘಾತಕ್ಕೆ ರೈತ ಬಲಿಯಾಗಿರುವ ಘಟನೆ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ನಡೆದಿದೆ. ಗುಂಡ್ಲಪೇಟೆಯ ರೈತ ಈಶ್ವರ್ (50) ಮೃತ ರೈತ.
ಫ್ರೀಡಂ ಪಾರ್ಕ್​ಗೆ ಪ್ರತಿಭಟನೆಗೆ ಆಗಮಿಸುವಾಗ ದುರ್ಘಟನೆ ಸಂಭವಿಸಿದೆ.

50 ವರ್ಷದ ರೈತ ಈಶ್ವರ್ ಗುಂಡ್ಲಪೇಟೆಯಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದಿದ್ದರು. ರೈಲು ಇಳಿದು ಹೊರ ಬರುವಾಗ ಏಕಾಏಕಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಪೊಲೀಸರು ಸಿಪಿಆರ್ ಕೊಡಲು ಪ್ರಯತ್ನಿಸಿದ್ದಾರೆ. ಆ ಬಳಿಕ  ಅಪೋಲೋ ಆಸ್ಪತ್ರೆಗೆ ಸಾಗಿಸೋ ಮಾರ್ಗ ಮಧ್ಯೆ ರೈತ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ : CS ಶಾಲಿನಿ ರಜನೀಶ್ ವಿರುದ್ಧದ ಅವಹೇಳನಕಾರಿ ಹೇಳಿಕೆ – FIR ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ರವಿಕುಮಾರ್!

Btv Kannada
Author: Btv Kannada

Read More