RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ – ವಿಚಾರಣೆಗೆ ಹಾಜರಾದ IPS ಬಿ.ದಯಾನಂದ್​!

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜಿ.ಜಗದೀಶ್‌ ಅವರು ಮ್ಯಾಜಿಸ್ಟೀರಿಯಲ್‌ ತನಿಖೆ ನಡೆಸುತ್ತಿದ್ದಾರೆ.

ಈ ಸಂಬಂಧ ವಿಚಾರಣೆ ಹಾಜರಾಗಲು ಮಾಜಿ ಕಮಿಷನರ್‌ ದಯಾನಂದ್‌ ಮತ್ತು ಇಬ್ಬರು ಡಿಸಿಪಿಗಳು ಸೇರಿದಂತೆ ಆರು ಪೊಲೀಸ್ ಅಧಿಕಾರಿಗಳ ವಿಚಾರಣೆಗೆ ನೋಟಿಸ್‌ ನೀಡಲಾಗಿತ್ತು. ಆದರೆ, ಇಷ್ಟು ದಿನ ಬಿ.ದಯಾನಂದ ವಿಚಾರಣೆಗೆ ಗೈರಾಗಿದ್ದರು.

ಇದೀಗ ಇಂದು ಅಮಾನತಾದ ಆದ ಕಮಿಷನರ್ ದಯಾನಂದ ಅವರು ಜಿಲ್ಲಾಧಿಕಾರಿ ಜಗದೀಶ್ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಕೆಲ ದಾಖಲೆಗಳ ಸಮೇತ ದಯಾನಂದ್​ ಅವರು ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.

ಜೂ.4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ಐಪಿಎಲ್‌ ಕಪ್‌ ಗೆದ್ದ ಹಿನ್ನೆಲೆ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾಜಿ ಕಮಿಷನರ್‌ ನೇತೃತ್ವದಲ್ಲಿ ಬಂದೋಬಸ್ತ್‌, ಭದ್ರತೆ ಕೈಗೊಂಡಿದ್ದರಿಂದ ಆ ಕುರಿತು, ಮಾಹಿತಿ ಪಡೆಯಲು ಮಾಜಿ ಕಮಿಷನರ್‌ ದಯಾನಂದ್‌ ಸೇರಿ 50 ಪೊಲೀಸರ ವಿಚಾರಣೆಗೆ ನೋಟಿಸ್‌ ನೀಡಲಾಗಿತ್ತು.

ಇದನ್ನೂ ಓದಿ : ಬಿಡಿಎ ಭರ್ಜರಿ ಕಾರ್ಯಾಚರಣೆ – ಒತ್ತುವರಿಯಾಗಿದ್ದ 8.20 ಕೋಟಿ ಮೌಲ್ಯದ ಆಸ್ತಿ ಜಪ್ತಿ! 

Btv Kannada
Author: Btv Kannada

Read More