ಗದಗ ಸಿಪಿಐ ಡಿಬಿ ಪಾಟೀಲ ಮನೆ ಮೇಲೆ ಹಣದ ದಾಳಿ : ಗದಗ ಸಿಪಿಐ ಡಿಬಿ ಪಾಟೀಲ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಈ ವೇಳೆ 3 ಲಕ್ಷಕ್ಕೂ ಹೆಚ್ಚು ನಗದು (₹500, ₹200 ಮುಖಬೆಲೆಯ ನೋಟುಗಳಲ್ಲಿ), ಚಿಲ್ಲರೆ ಹಣ, ಬೆಳ್ಳಿ ಕಾಯಿನ್ ಪತ್ತೆಯಾಗಿದೆ. ಬಾಗಲಕೋಟೆ, ಜಮಖಂಡಿ, ಕೆರೂರ ಮನೆಗಳಲ್ಲೂ ದಾಳಿ ಮಾಡಲಾಗಿದ್ದು, ಸಿಪಿಐ ಪಾಟೀಲ ಅವರ ಬಾಡಿಗೆ ಮನೆಯಲ್ಲಿ ನಗದು ಸಿಕ್ಕಿದ್ದು, ಭ್ರಷ್ಟಾಚಾರದ ಆರೋಪದ ಮೇಲೆ ತನಿಖೆ ಮುಂದುವರೆದಿದೆ.

ಚಿಕ್ಕಮಗಳೂರು ನಗರಸಭೆ ಲೆಕ್ಕಾಧಿಕಾರಿ ಮನೆ ಮೇಲೆ ದಾಳಿ:

ಚಿಕ್ಕಮಗಳೂರಿನ ನಗರಸಭೆ ಲೆಕ್ಕಾಧಿಕಾರಿ ಲತಾ ಮಣಿ ನಿವಾಸದ ಮೇಲೆ ದಾಳಿ ಲೋಕಾಯುಕ್ತ ದಾಳಿ. ಎರಡು ತಂಡಗಳ ಲತಾ ಮಣಿ ನಿವಾಸದಲ್ಲಿ ದಾಖಲೆ ಪರಿಶೀಲನೆ. ನಗರದ ಜಯನಗರ ಬಡಾವಣೆಯಲ್ಲಿ ಇರುವ ಲತಾ ಮಣಿ ನಿವಾಸ. ಚಿಕ್ಕಮಗಳೂರು ನಗರದ ಜಯನಗರ ಬಡಾವಣೆಯ ಮನೆಯಿಂದ ಕಚೇರಿಗೆ ಬಂದ ಅಧಿಕಾರಿಗಳ ತಂಡ. ಬೆಳಗ್ಗೆ ನಗರಸಭೆ ಲೆಕ್ಕಾಧಿಕಾರಿ ಲತಾಮಣಿ ಮನೆ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತರು. ನಗರಸಭೆಗೆ ಬಂದು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ನಗರಸಭೆ ಆಯುಕ್ತರನ್ನ ಕರೆಸಿ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ.

ಇದನ್ನೂ ಓದಿ : ಬಂಗಲೆ, ಫಾರ್ಮ್​ ಹೌಸ್, 25 ಲಕ್ಷ, ಚಿನ್ನಾಭರಣ, ರೇಷ್ಮೆಸೀರೆ.. ಬಿಬಿಎಂಪಿ EE ಪ್ರಕಾಶ್ ಅಕ್ರಮ ಸಂಪತ್ತಿನ ಕೋಟೆ ಬಯಲು!