ದೊಡ್ಡಬಳ್ಳಾಪುರ : ಕಾರ್-ಬೈಕ್ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಹುಲಿಕುಂಟೆ ಟೋಲ್ಬಳಿ ಸಂಭವಿಸಿದೆ. 65 ವರ್ಷದ ಹುಲಿಕುಂಟೆ ಕಾಲೋನಿ ನಿವಾಸಿ ಶಿವಣ್ಣ ಮೃತ ವ್ಯಕ್ತಿ.
ಶಿವಣ್ಣ ದಿನಸಿ ತೆಗೆದುಕೊಳ್ಳಲು ಹುಲಿಕುಂಟೆಗೆ ಬಂದಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ಶಿವಣ್ಣ ಸಾವಿನಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಪರಿಣಾಮ ಸುಮಾರು 5 ಕಿಲೋ ಮೀಟರ್ ದೂರ ಟ್ರಾಫಿಕ್ ಜಾಮ್ ಆಗಿತ್ತು.
ದೊಡ್ಡಬಳ್ಳಾಪುರ-ದಾಬಸ್ಪೇಟೆ ನಡುವಿನ ಹೆದ್ದಾರಿ, ಚೆನ್ನೈ -ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಸಂಪರ್ಕಿಸುವ ರಿಂಗ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಈ ಅಪಘಾತ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದೊಡ್ಮನೆಯಲ್ಲಿ ರಜತ್-ಗೌತಮಿ ಕಿತ್ತಾಟ.. ಪಾಸಿಟಿವಿಟಿ ಜಪ ಬಿಟ್ಟು ಕಡೆಗೂ ರೊಚ್ಚಿಗೆದ್ದ ಗೌತಮಿ..!
Post Views: 1,100