ಬೆಂಗಳೂರು : ಕೋರ್ಟ್ಗೆ ಕರೆತಂದಿದ್ದ ಆರೋಪಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗೌತಮ್ ಆತ್ಮಹತ್ಯೆ ಮಾಡಿಕೊಂಡ ಆರೋಪಿ.
ಗೌತಮ್ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಆರೋಪಿ ಗೌತಮ್ನನ್ನು ಸಿಟಿ ಸಿವಿಲ್ ಕೋರ್ಟ್ಗೆ ಕರೆತಂದಿದ್ದರು. ಈ ವೇಳೆ ಸರ್, ಟಾಯ್ಲೆಟ್ಗೆ ಹೋಗಿ ಬರ್ತೀನಿ ಅಂತ ಗೌತಮ್ ಹೇಳಿದ್ದು, ಆತನ ಹಿಂದೆಯೇ ಪೊಲೀಸ್ ಪೇದೆ ಕೂಡ ಹೋಗಿದ್ದರು. ಆದರೆ ಅಷ್ಟರಲ್ಲೇ ಗೌತಮ್ ಓಡಿಹೋಗಿ ಐದನೇ ಅಂತಸ್ಥಿನಿಂದ ಜಿಗಿದಿದ್ದಾನೆ.
ನೆಲಕ್ಕೆ ಬೀಳ್ತಿದ್ದಂತೆ ಗೌತಮ್ನ ಪ್ರಾಣಪಕ್ಷಿ ಹಾರಿ ಹೋಗಿದ್ದು, ಸದ್ಯ ಹಲಸೂರುಗೇಟ್ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಇದನ್ನೂ ಓದಿ : ವಿದೇಶದಲ್ಲಿ ಕೂತು ಸೋಶಿಯಲ್ ಮೀಡಿಯಾದಲ್ಲಿ ಕೋಮುಗಲಭೆ ಪೋಸ್ಟ್ – 18 ಅಕೌಂಟ್ಗಳನ್ನು ಡಿಲೀಟ್ ಮಾಡಿ ಪೊಲೀಸರ ಕ್ರಮ!
Author: Btv Kannada
Post Views: 390







