ಅಮಾಯಕ ಮಹಿಳೆ ಮೇಲೆ ಮೇಟಗಳ್ಳಿ ಸಬ್​ ಇನ್ಸ್​​ಪೆಕ್ಟರ್ ದೌರ್ಜನ್ಯ.. SI ಲತಾ ಕೃತ್ಯಕ್ಕೆ ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ.. ಬಂಧನಕ್ಕೆ ಆಗ್ರಹ!

ಮೈಸೂರು : ಲೇಖಕಿ ಬಾನು ಮುಷ್ತಾಕ್‌ ಅವರನ್ನು ದಸರಾ ಉದ್ಘಾಟಿಸಲು ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಕರೆ ನೀಡಿದ್ದ ‘ಚಾಮುಂಡಿ ಬೆಟ್ಟ ಚಲೋ’ ಮೆರವಣಿಗೆ ವೇಳೆ ನಿನ್ನೆ ದೊಡ್ಡ ಹೈಡ್ರಾಮಾ ನಡೆದಿದೆ. ಈ ಮಧ್ಯೆ ಸಜ್ಜನ ಮಹಿಳೆಯೊಬ್ಬರು ಕಣ್ಣೀರು ಹಾಕಿದ ಪ್ರಸಂಗವೂ ನಡೆದಿದೆ.

ಹೌದು.. ಮಹಿಳೆಯೊಬ್ಬರ ಮೇಲೆ ವಿನಾಕಾರಣ ಮೇಟಗಳ್ಳಿ ಸಬ್​ ಇನ್ಸ್​​ಪೆಕ್ಟರ್ ಲತಾ ದೌರ್ಜನ್ಯ ಮಾಡಿದ್ದಾರೆ. ಎಸ್​ಐ ಲತಾ ದೌರ್ಜನ್ಯಕ್ಕೆ ಮಹಿಳೆ ಬೀದಿಯಲ್ಲೇ ಕಣ್ಣೀರು ಹಾಕಿದ್ದಾರೆ. ನನ್ನ ಮಗಳಿಗೆ ಇಂಟರ್​​ವ್ಯೂ ಇದೆ, ಚಾಮುಂಡೇಶ್ವರಿ ತಾಯಿ ಬಳಿ ಬೇಡಲು ಹೋಗುತ್ತಿದ್ದೇನೆ, ದಯವಿಟ್ಟು ಬಿಡಿ ಎಂದರೂ ಕೇಳದ ಎಸ್​​ಐ ಲತಾ, ಅಮಾಯಕ ಮಹಿಳೆಯನ್ನು ರಸ್ತೆಯ ಮಧ್ಯದಲ್ಲೇ ಎಳೆದು ಹಾಕಿದ್ದಾರೆ.

ಸಬ್​ ಇನ್ಸ್​​ಪೆಕ್ಟರ್ ಲತಾ
ಸಬ್​ ಇನ್ಸ್​​ಪೆಕ್ಟರ್ ಲತಾ

ಅಮಾಯಕ ಮಹಿಳೆಯೂ ಅಳುತ್ತಾ ‘ಚಾಮುಂಡೇಶ್ವರಿ ತಾಯಿ ಬೇಡಲು ಹೋಗುತ್ತಿದ್ದೇನೆ. ನಮ್ಮನ್ನು ತಡೆದು ಎಳೆದು ಹಾಕುತ್ತಿದ್ದೀರಾ? ಇದು ನ್ಯಾಯವಲ್ಲ’ ಅಂತ ಪೊಲೀಸರ ನಡೆ ಖಂಡಿಸಿ ಸ್ಥಳದಲ್ಲೇ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

<iframe src="https://www.facebook.com/plugins/video.php?height=476&href=https%3A%2F%2Fwww.facebook.com%2Freel%2F1508271956859149%2F&show_text=false&width=267&t=0" width="267" height="476" style="border:none;overflow:hidden" scrolling="no" frameborder="0" allowfullscreen="true" allow="autoplay; clipboard-write; encrypted-media; picture-in-picture; web-share" allowFullScreen="true"></iframe>

ಇನ್ನೊಂದೆಡೆ ಸಜ್ಜನ ಮಹಿಳೆಯ ಜೊತೆ ಕ್ರಿಮಿನಲ್​​ಗಳಂತೆ ನಡೆದುಕೊಂಡ ಎಸ್​ಐ ಲತಾ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ಮಹಿಳಾ ಭಕ್ತರ ಮೇಲೆ ದೌರ್ಜನ್ಯ ಮಾಡಿದ ದುರಹಂಕಾರಿ ಎಸ್​ಐ ಲತಾ ವಿರುದ್ದ ಸಾರ್ವಜನಿಕರು ಸಿಡಿದೆದ್ದಿದ್ದು, ಚಾಮುಂಡಿ ಭಕ್ತೆ ಮಹಿಳೆಗೆ ನ್ಯಾಯ ಕೊಡಿ, ಎಸ್​ಐ ಲತಾ ಸಸ್ಪೆಂಡ್​ ಮಾಡಿ ಎಂದು ಗೃಹ ಸಚಿವರಿಗೆ ಜನ ಆಗ್ರಹಿಸಿದ್ದಾರೆ. ಸಜ್ಜನ ಭಕ್ತೆಯ ಮೇಲೆ ದೌರ್ಜನ್ಯ ನಡೆಸಿದ್ದ ಮೇಟಗಳ್ಳಿ ಸಬ್​​ ಇನ್ಸ್​ಪೆಕ್ಟರ್​ ಲತಾ ಮೇಲೆ ನೂರಾರು ದೂರುಗಳಿವೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಗೃಹ ಮಂತ್ರಿಗಳೇ ಚಾಮುಂಡಿ ತಾಯಿ ದರ್ಶನಕ್ಕೆ ಹೋಗ್ತಿದ್ದ ಮಹಿಳೆಯನ್ನ ಹೇಗೆ ಎಳದಾಡಿದ್ದಾರೆ ನೋಡಿ, ಕರ್ನಾಟಕದಲ್ಲಿ ದೇವರ ದರ್ಶನಕ್ಕೂ ಹೋಗಲು ಸ್ವಾತಂತ್ರ್ಯ ಇಲ್ವಾ? ಮಹಿಳಾ ಆಯೋಗದ ಅಧ್ಯಕ್ಷರೇ, ಎಸ್​ಐ ಲತಾ ಮೇಲೆ ಎಫ್​ಐಆರ್​ಗೆ ಶಿಫಾರಸು ಮಾಡಿ, ಎಸ್​ಐ ಲತಾರನ್ನು ಸಸ್ಪೆಂಡ್ ಅಲ್ಲ, ಕೂಡಲೇ ಅರೆಸ್ಟ್ ಮಾಡಬೇಕು ಎಂದು ರಾಜ್ಯಾದ್ಯಂತ ಜನ ಆಕ್ರೋಶ ಹೊರಹಾಕಿತ್ತಿದ್ದಾರೆ.

ಇದನ್ನೂ ಓದಿ : ಬಿಎಂಟಿಸಿ MD ರಾಮಚಂದ್ರನ್ ವಿರುದ್ದ ಸಾಲು ಸಾಲು ಗಂಭೀರ ಆರೋಪ – ಕಠಿಣ ಕ್ರಮಕ್ಕೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯಗೆ ದೂರು!

Btv Kannada
Author: Btv Kannada

Read More