ವಿಶ್ವದಾಖಲೆ ಬರೆದ ಮಹಾ ಕುಂಭಮೇಳ ಸಂಪನ್ನ- ಭಾರತದ ಆರ್ಥಿಕತೆಗೆ ಎಷ್ಟು ಲಕ್ಷ ಕೋಟಿ ಆದಾಯ ಬಂದಿದೆ ಗೊತ್ತಾ?

144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳಕ್ಕೆ ಶಿವರಾತ್ರಿಯಂದು ವಿದ್ಯುಕ್ತ ತೆರೆ ಬಿದ್ದಿದೆ. ಜಗತ್ತಿನ ಮೂಲೆ ಮೂಲೆಯಿಂದ ಬಂದ ಕೋಟಿ ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಈ ನಡುವೆ ಮುಂದಿನ ಕುಂಭಮೇಳ ಎಲ್ಲಿ ನಡೆಯಲಿದೆ ಅನ್ನೋ ಅಪ್​ಡೇಟ್ ಕೂಡ ಸಿಕ್ಕಿದೆ.

ಈ ಬಾರಿ ಈ ಮಹಾ ಕುಂಭಮೇಳದಲ್ಲಿ ಸುಮಾರು 66.30 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದಾರೆ. 40 ಕೋಟಿ ಜನರ ಆಗಮನದ ನಿರೀಕ್ಷೆಯಿಟ್ಟಿದ್ದ ಉತ್ತರ ಪ್ರದೇಶ ಸರ್ಕಾರದ ಲೆಕ್ಕಾಚಾರವೇ ತಲೆಕೆಳಗಾಗುವಂತೆ ಮಾಡಿದೆ. ಬಾಲಿವುಡ್​ ಸೆಲೆಬ್ರಿಟಿಗಳಿಂದ ಹಿಡಿದು ಪ್ರಪಂಚದ ಮೂಲೆ ಮೂಲೆಯಿಂದ ಬಂದ ಕೋಟಿ ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಕೊನೆಯ ದಿನವಾದ ನಿನ್ನೆ 1 ಕೋಟಿ 53 ಲಕ್ಷ ಭಕ್ತರು ಗಂಗೆಯಲ್ಲಿ ಮಿಂದೆದ್ದಿದ್ದಾರೆ.

ಮಹಾ ಕುಂಭಮೇಳದಿಂದ ಭಾರತದ ಆರ್ಥಿಕತೆಗೆ 3 ಲಕ್ಷ ಕೋಟಿ ರೂ. ಆದಾಯ :

144 ವರ್ಷಗಳಿಗೊಮ್ಮೆ ನಡೆದ ಮಹಾ ಕುಂಭಮೇಳ ಭಾರತದ ಆರ್ಥಿಕತೆಗೆ ಮತ್ತಷ್ಟು ಬಲ ತಂದಿದ್ದು, 45 ದಿನಗಳ ಈ ಧಾರ್ಮಿಕ ಕಾರ್ಯಕ್ರಮದಿಂದ ಉತ್ತರ ಪ್ರದೇಶ ಸರ್ಕಾರಕ್ಕೆ 3 ಲಕ್ಷ ಕೋಟಿ ರೂ. ಆದಾಯ ತಂದಿದೆ ಎಂದು ಅಂದಾಜಿಸಲಾಗಿದೆ. 10 ಕೋಟಿ ಜನರಿಗೆ ಉದ್ಯೋಗವೂ ನೀಡಿದೆ. ಇನ್ನು ಸಾಕಷ್ಟು ಸವಾಲುಗಳ ನಡುವೆಯೂ ಯಶಸ್ವಿಯಾಗಿ ಮಹಾಕುಂಭ ಮೇಳ ಅಂತ್ಯವಾಗಿದ್ದು, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಅವರು ಈ ಯಶಸ್ಸಿಗೆ ಕಾರಣರಾದ.. ಕುಂಭಮೇಳದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಮುಂದಿನ ಕುಂಭ ಎಲ್ಲಿ..?

  • 3 ವರ್ಷಕ್ಕೊಮ್ಮೆ ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ಕುಂಭಮೇಳ
  • ಪ್ರಯಾಗ್​ರಾಜ್, ಹರಿದ್ವಾರ, ಉಜ್ಜೈನಿ ಹಾಗೂ ನಾಸಿಕ್
  • ಮುಂದಿನ ಪೂರ್ಣ ಕುಂಭಮೇಳ 2027ಕ್ಕೆ ನಾಸಿಕ್​ನಲ್ಲಿ
  • 12 ವರ್ಷಗಳ ಹಿಂದೆ ನಾಸಿಕ್​ನಲ್ಲಿ ಪೂರ್ಣಕುಂಭ ನಡೆದಿತ್ತು
  • ಮುಂದಿನ ಕುಂಭ ಗೋದಾವರಿ ನದಿ ತೀರದಲ್ಲಿ ನಡೆಯಲಿದೆ
Btv Kannada
Author: Btv Kannada

Leave a Comment

Read More

Read More